ಬೆಂಗಳೂರಿಗೆ ಬರಲಿದೆ ಓಟದ ಮಜಾ
Posted date: 21 Wed, Mar 2012 ? 09:14:07 AM

ಬೆಂಗಳೂರಿನಲ್ಲಿ ಎರಡು ವರ್ಷದ ಕೆಳಗೆ ಓಟದ ಕಾರ್ಯಕ್ರಮ ನಡೆಸಿದಾಗ ಸುಮಾರು ೨೨೦೦೦ ಆಸಕ್ತರು ಪಾಲ್ಗೋಂಡಿದ್ದರು. ಈಗ ಟಾಟಾ ಕನ್ಸಲ್‌ಟೆನ್ನಸಿ ಸರ್ವಿಸ್ ಇವರು ಬೆಂಗಳೂರಿನ ನಾಗರಿಕರಿಗೆ ಆರೋಗ್ಯ ಮತ್ತು ಫಿಟ್‌ನೆಸ್ ಪ್ರಜ್ಘೆಯನ್ನು ಮೂಡಿಸಲು ಓಟದ ಸ್ಪರ್ಧೆಯನ್ನು ಕಂಠೀರವ ಸ್ಟೇಡಿಯಂನಲ್ಲಿ ಮೇ ೨೭ನೇ ತಾರೀಖು ಹಮ್ಮಿಕೊಂಡಿದ್ದಾರೆ.  ಪ್ರತಿಷ್ಠಿತ ಕಂಪೆನಿಗಳು, ಕರ್ನಾಟಕ ಸರ್ಕಾರದ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಸಹಯೋಗದೊಂದಿಗೆ ಭಾರತೀಯ ಅಥ್ಲೆಟಿಕ್ ಒಕ್ಕೂಟದ ಆಶ್ರಯದಲ್ಲಿ ನಡೆಯಲಿದೆ. ಇದರಲ್ಲಿ ೩೦೦೦೦ ಹೆಚ್ಚು ಜನರು ಪಾಲ್ಗೋಳ್ಳುವ ನಿರೀಕ್ಷೆ ಇದೆ ಎನ್ನುವುದು ಟಾಟಾನ ಮುಖ್ಯಸ್ಥರ ಹೇಳಿಕೆಯಾಗಿದೆ. ಆರೋಗ್ಯ ಕಾಪಾಡಿಕೊಂಡರೆ ಎಲ್ಲವನ್ನು ಪಡೆದುಕೊಂಡಂತೆ, ಅದೇ ರೀತಿ ಬಡತನದಲ್ಲಿರುವ ಜನರಿಗೆ ನಾವುಗಳು ಉದಾರ ರೀತಿಯುಲ್ಲಿ ಸಹಾಯ ಮಾಡಬೇಕು ಎಂದು ಕರೆ ನೀಡಿದರು ಸರ್ಕಾರ ಕಾರ್ಯದರ್ಶಿ ಪೆರುಮಾಲ್. ಓಟಕ್ಕೆ ಪೋಲೀಸ್ ಇಲಾಖೆಯಿಂದ ಸಂಪೂರ್ಣ ಸಹಕಾರ ನೀಡಲಾಗುವುದು ಎಂಬುದಾಗಿ ಡಿಸಿಪಿ (ಟ್ರಾಫಿಕ್) ಸಲೀಮ್ ಭರವಸೆ ಕೊಟ್ಟರು.

 ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ೧೦ಕೆ ಓಟದ ಪ್ರಚಾರ ರಾಯಬಾರಿಯಾಗಿದ್ದು ನಾನು ಮತ್ತು ನನ್ನ ಅಭಿಮಾನಿಗಳು ಓಟದಲ್ಲಿ ಪಾಲ್ಗೋಳ್ಳುತ್ತೇವೆ ಎಂದರು. ಶಿವಮೊಗ್ಗದ ಹುಡುಗ ಉಲ್ಟದಲ್ಲಿ ಪುನೀತ್‌ರ ಚಿತ್ರವನ್ನು ರಚಿಸಿ ಪವರ್‌ಸ್ಟಾರ್‌ಗೆ ನೀಡಿದ್ದು ವಿಶೇಷ ಏನಿಸಿತ್ತು.. ನಿವೃತ್ತ ಮುಖ್ಯಕಾರ್ಯದರ್ಶಿ ಸುದಾಕರರಾವ್, ಬಿಎಂಡಬ್ಲ್ಯು, ನೈಕ್, ಪೆಪ್ಸಿಕೋ ಕಂಪೆನಿಯ ಅಧಿಕಾರಿಗಳು ೧೦ಕೆ ಓಟದ ಬಗ್ಗೆ ಮಾತನಾಡಿದರು. ಹಸಿರು ಕ್ರಾಂತಿಗಾಗಿ ದುಡಿಯುವವರನ್ನು ಗುರುತಿಸಿ ಅವರಿಗೆ ಗ್ರೀನ್ ಸ್ಟಾರ್ ಮತ್ತು ಕಾರ್ಪೋರೇಟ್ ಗ್ರೀನ್ ಸ್ಟಾರ್ ಎಂದು ಎರಡು ವಿಭಾಗಗಳಲ್ಲಿ ಪ್ರಶಸ್ತಿಯನ್ನು ನೀಡುವ ಯೋಜನೆಯನ್ನು ಟಿಸಿಎಸ್ ಹಮ್ಮಿಕೊಂಡಿದೆ. ೧೦ಕೆ ಓಟದಲ್ಲಿ ಭಾಗವಹಿಸಲು ಆಸಕ್ತಿ ಇರುವವರು ಟಿಸಿಎಸ್ ಕಂಪೆನಿಯನ್ನು ಭೇಟಿ ಮಾಡಬಹುದಾಗಿದೆ.

 

                                    ಆರ್.ಚಂದ್ರಶೇಖರ್

 

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed